ಉಡುಪಿಯಯ ಎಂ ಜಿ ಎಂ ಕಾಲೇಜು ಹಾಗೂ ಪೂರ್ಣಪ್ರಜ್ಞ ಕಾಲೇಜಿನ 9 ವಿದ್ಶಾರ್ಥಿನಿಯರು ಮತ್ತು 5 ಮಂದಿ ವಿದ್ಶಾರ್ಥಿಗಳನ್ನೊಳಗೊಂಡ ತಂಡವು ಗಣರಾಜ್ಶೋತ್ಸವದ ಪಥಸಂಚಲನದ ಸಂದರ್ಭದಲ್ಲಿ ಕಂಗೀಲು ನೃತ್ಯ ಪ್ರದರ್ಶನ ನೀಡಲಿದ್ದಾರೆ.
ಆಯ್ಕೆಯ ಝೋನಲ್ ಮಟ್ಟದ ಮೊದಲ ಪ್ರಕ್ರಿಯೆಯು ಡಿಸೆಂಬರ 11ರಂದು ಬೆಂಗಳೂರಿನಲ್ಲಿ ನಡೆದಿದ್ದು, ಕಿರಣ್ ಪಡುಬಿದ್ರಿ ಅವರ ತರಬೇತಿಯೊಂದಿಗೆ ಈ ಸ್ಪರ್ಧೆಯಲ್ಲಿ ಭಾಗವಹಿಸಿ, ದೆಹಲಿಯಲ್ಲಿ ನಡೆಯಲಿರುವ ಅಂತಿಮ ಸುತ್ತಿನ ಸ್ಪರ್ಧೆಗೆ ಆಯ್ಕೆಗೊಂಡಿದ್ದರು.
ಡಿಸೆಂಬರ್ 18 ರಂದು ದೆಹಲಿಯಲ್ಲಿ ನಡೆದ ಎರಡನೆಯ ಹಂತದ ಗ್ರ್ಶಾಂಡ್ ಪೈನಲ್ ಮಟ್ಟದ ಆಯ್ಕೆಯಲ್ಲಿ 104 ತಂಡಗಳು ಭಾಗವಹಿಸಿದ್ದು, ಇದರಲ್ಲಿ ಉಡುಪಿ ಬೀಟ್ಸ್ ತಂಡವು ಮೊದಲ 4 ನೆಯ ತಂಡವಾಗಿ ಆಯ್ಕೆಯಾಗಿತ್ತು. ಗುರುಚರಣ್ ಪೊಲಿಪು ಅವರ ಮಾರ್ಗದರ್ಶನದೊಂದಿಗೆ ಈ ತಂಡವು ಸ್ಪರ್ಧಿಸಿತ್ತು.
ಇನ್ನು ಅಂತಿಮ ಆಯ್ಕೆಯ ಬಳಿಕ ತಂಡದ ಎಲ್ಲ ಸದಸ್ಶರೂ ಜನವರಿ 7 ರಂದು ದೆಹಲಿಗೆ ತೆರಳಿದ್ದು ಇದೀಗ ಅಂತಿಮ ಪ್ರದರ್ಶನದ ತಾಲೀಮಿನಲ್ಲಿ ಪ್ರತಿ ನಿತ್ಯ ಭಾಗವಹಿಸುತ್ತಿದ್ದಾರೆ.
ಕಾಮೆಂಟ್ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ