Slider

ಜಾಹೀರಾತಿಗಾಗಿ ಸಂಪರ್ಕಿಸಿ

ಫೋನ್: 86605 39735

*ಹಿಜಾಬ್’ ಧರಿಸಿ ಬಂದ್ರೇ ‘SSLC ಪರೀಕ್ಷೆ’ಗೆ ಅನುಮತಿಯಿಲ್ಲ, ಪರೀಕ್ಷೆ ತಪ್ಪಿಸಿದ್ರೇ ‘ಮರುಪರೀಕ್ಷೆ’ಯೂ ಇಲ್ಲ – ಸಚಿವ ಬಿ.ಸಿ ನಾಗೇಶ್*27-3-2022

*ಹಿಜಾಬ್’ ಧರಿಸಿ ಬಂದ್ರೇ ‘SSLC ಪರೀಕ್ಷೆ’ಗೆ ಅನುಮತಿಯಿಲ್ಲ, ಪರೀಕ್ಷೆ ತಪ್ಪಿಸಿದ್ರೇ ‘ಮರುಪರೀಕ್ಷೆ’ಯೂ ಇಲ್ಲ – ಸಚಿವ ಬಿ.ಸಿ ನಾಗೇಶ್*

ಬೆಂಗಳೂರು: ನಾಳೆ ಎಸ್ ಎಸ್ ಎಲ್ ಸಿ ಪರೀಕ್ಷೆ ( SSLC Main Exam ) ಪ್ರತಿವರ್ಷದಂತೆ ಯಾವುದೇ ಅಡ್ಡಿ ಆತಂಕವಿಲ್ಲದೆ ನಡೆಯಲಿದೆ ಎನ್ನುವ ವಿಶ್ವಾಸವಿದೆ. ಕೋರ್ಟ್ ಆದೇಶವನ್ನು ಪಾಲಿಸಿ ವಿದ್ಯಾರ್ಥಿಗಳು ಹಿಜಾಬ್ ಬಿಟ್ಟು ಸಮವಸ್ತ್ರದಲ್ಲಿ ಪರೀಕ್ಷೆ ಬರೆಯಬೇಕು.
ಹಿಜಾಬ್ ಗಾಗಿ ಪರೀಕ್ಷೆ ತಿರಸ್ಕರಿಸಿದ್ರೇ.. ಮತ್ತೆ ಮರು ಪರೀಕ್ಷೆ ಕೂಡ ಇಲ್ಲ ಎಂಬುದಾಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ತಿಳಿಸಿದ್ದಾರೆ.



ಈ ಬಗ್ಗೆ ಇಂದು ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ನಾಳೆಯ ಎಸ್ ಎಸ್ ಎಲ್ ಸಿ ಪರೀಕ್ಷೆಗೆ ಎಲ್ಲಾ ಸಿದ್ಧತೆಯನ್ನು ಮಾಡಿಕೊಳ್ಳಲಾಗಿದೆ. ಹಿಜಾಬ್ ಸಂಘರ್ಷದ ಕಾರಣದಿಂದಾಗಿ ಪರೀಕ್ಷಾ ಕೇಂದ್ರದ ಬಳಿಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ಹಿಜಾಬ್ ಧರಿಸಿ ಬಂದ್ರೇ ಅವರೇ ಕ್ರಮ ಕೈಗೊಳ್ಳಲಿದ್ದಾರೆ ಎಂದರು.
ಹಿಜಾಬ್ ಧರಿಸಿ ಬಂದ್ರೇ ನಾಳಿನ ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆಯೋದಕ್ಕೆ ಅವಕಾಶವಿಲ್ಲ. ಸಮವಸ್ತ್ರದಲ್ಲಿ ಬಂದ್ರೇ ಮಾತ್ರ ತರಗತಿಗೆ ಅವಕಾಶ. ಸಮವಸ್ತ್ರವಿಲ್ಲದ ಶಾಲೆಗಳ ಬಗ್ಗೆ ಡಿಡಿಪಿಐ ತೀರ್ಮಾನವೇ ಅಂತಿಮವಾಗಿದೆ. ಈ ಬಾರಿ ಎಸ್ ಎಸ್ ಎಲ್ ಸಿ ಪರೀಕ್ಷೆ ತಪ್ಪಿಸಿದ್ರೇ ಮರು ಪರೀಕ್ಷೆ ಕೂಡ ಇಲ್ಲ ಎಂಬುದಾಗಿ ಹೇಳಿದರು.


0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo