Slider

ಜಾಹೀರಾತಿಗಾಗಿ ಸಂಪರ್ಕಿಸಿ

ಫೋನ್: 86605 39735

ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ ದೊಡ್ಡಣ್ಣ ಗುಡ್ಡೆ ನಾಗ ಸಂಕೋಚ ಪ್ರಕ್ರಿಯೆ

Udupifirst-udupinews-


 ದೊಡ್ಡಣ್ಣ ಗುಡ್ಡೆಯ ಶ್ರೀಚಕ್ರ ಪೀಠ ಸುರಪೂಜಿಕೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದ ನಾಗಾಲಯದಲ್ಲಿ ನಾಗ ಬಿಂಬ ಸಂಕೋಚ ಪ್ರಕ್ರಿಯೆಯು ಕ್ಷೇತ್ರದ ಧರ್ಮದರ್ಶಿ ಶ್ರೀಯುತ ಶ್ರೀ ಶ್ರೀ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ ವೇದಮೂರ್ತಿ ಕೃಷ್ಣಮೂರ್ತಿ ತಂತ್ರಿಗಳ ನೇತೃತ್ವದಲ್ಲಿ ನೆರವೇರಿತು...

 ನಾಗ ಬಿಂಬ ಸಂಕೋಚದ ಜೊತೆಗೆ ಬ್ರಹ್ಮಲಿಂಗೇಶ್ವರ ರಕ್ತೇಶ್ವರಿ ನಂದಿಕೋಣ ಕ್ಷೇತ್ರಪಾಲ ಸಂಕೋಚ ಪ್ರಕ್ರಿಯೆಯು ನೆರವೇರಿ ಶಿಲಾ ಬಿಂಬಗಳನ್ನು ತಾತ್ಕಾಲಿಕವಾಗಿ ನಿರ್ಮಿಸಿದ ಬಾಲಾ ಲಯದಲ್ಲಿ ಇರಿಸಲಾಯಿತು...

 ಆ ಪ್ರಯುಕ್ತ ವಿವಿಧ ಧಾರ್ಮಿಕ ಪ್ರಕ್ರಿಯೆಗಳು ಸಂಪನ್ನಗೊಂಡವು.

ನವೀಕೃತ ನಾಗಾಲಯದ ನೂತನ ಆರೂಢದಲ್ಲಿ ಸಪರಿವಾರ ಸಹಿತವಾಗೀ ನಾಗಶಿಲಾ ಪ್ರತಿಷ್ಠೆಯು ಮೇ ತಿಂಗಳ ತಾರೀಕು ನಾಲ್ಕರಂದು ನೆರವೇರಲಿರುವುದು ಅಲ್ಲಿಯವರೆಗೆ ಯಾವುದೇ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿಕೊಡಲಾಗುವುದಿಲ್ಲ ಎಂದು ಕ್ಷೇತ್ರ ಉಸ್ತುವಾರಿ ಶ್ರೀಮತಿ ಕುಸುಮ ನಾಗರಾಜ್ ತಿಳಿಸಿರುತ್ತಾರೆ.





0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo