Slider

ಜಾಹೀರಾತಿಗಾಗಿ ಸಂಪರ್ಕಿಸಿ

ಫೋನ್: 86605 39735

ಉಡುಪಿ:-ಯಾವುದೇ ಕಾರಣಕ್ಕೂ ಲಾಕ್‌ಡೌನ್‌ ಇಲ್ಲ-ಶಾಸಕ ರಘಪತಿ ಭಟ್ ಹೇಳಿಕೆ29-11-2021

ಉಡುಪಿ:-ಕೊರೊನಾ ಅತಿಯಾಗಿ ಹೋಗುವ ಮುನ್ನ ಜಾಗ್ರತೆ ಮಾಡಿಕೊಳ್ಳಿ. ಯಾವುದೇ ಕಾರಣಕ್ಕೂ ಲಾಕ್‌ಡೌನ್‌ ಆಗುವುದಿಲ್ಲ ಎಂದು ಉಡುಪಿ ಶಾಸಕ ರಘುಪತಿ ಭಟ್ ಹೇಳಿದ್ದಾರೆ.

ಈ ಬಗ್ಗೆ ಉಡುಪಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಲಾಕ್‌ಡೌನ್‌ ಬಗ್ಗೆ ವದಂತಿಯ ಹರಡುತ್ತಿದೆ, "ಕೆಲವೊಂದು ಅಪಪ್ರಚಾರಗಳು ಕೂಡಾ ಆಗುತ್ತಿವೆ. ಈ ಹಂತದಲ್ಲಿ ಅಂತಹ ಯಾವುದೇ ಚರ್ಚೆಗಳು ಇಲ್ಲ. ವ್ಯಾಕ್ಸಿನೇಷನ್‌‌ನಲ್ಲಿ ನಾವು ಶೇ.90ರಷ್ಟು ಪ್ರಗತಿ ಸಾಧಿಸಿದ್ಧೇವೆ. ಹಾಗಾಗಿ ಯಾವ ವೈರಸ್‌ ಬಂದರೂ ಅದನ್ನು ಎದುರಿಸುವ ಶಕ್ತಿ ನಮಗಿದೆ" ಎಂದು ತಿಳಿಸಿದ್ದಾರೆ.

ಕೊರೊನಾ ಎರಡು ಅಲೆಗಳಿಂದ ನಾವು ಸಾಕಷ್ಟು ಕಷ್ಟಗಳನ್ನು ಅನುಭವಿಸಿದ್ದೇವೆ. ಕೊರೊನಾ ಮಾರ್ಗಸೂಚಿಗಳನ್ನು ಪಾಲಿಸುವುದೇ ಇದಕ್ಕಿರುವ ಮದ್ದು. ಕೊರೊನಾ ಅತಿರೇಕಕ್ಕೆ ಹೋಗುವ ಮುನ್ನ ಜಾಗೃತೆ ವಹಿಸಿ, ಯಾವುದೇ ಕಾರಣಕ್ಕೂ ಲಾಕ್‌ಡೌನ್‌ ಆಗುವುದಿಲ್ಲ ಎಂದರು.
ವರದಿ:-ಉಡುಪಿ ಫಸ್ಟ್
0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo