ಹಂಗಾರಕಟ್ಟೆ:-ಕೋವಿಡ್ ಕಾಲಾವಧಿಯ ನಂತರ ಈಗಷ್ಟೇ ವಾಣಿಜ್ಯ ವ್ಯಾಪಾರಗಳು ನಿಧಾನಗತಿಯಲ್ಲಿ ಚೇತರಿಸಿಕೊಳ್ಳುತ್ತಿದೆ. ಇಡೀ ವ್ಯಾಪಾರ ಕ್ಷೇತ್ರಕ್ಕೆ ಕೊರೋನಾ ನೀಡಿದ ಹೊಡೆತದಿಂದ ಉದ್ಯಮಗಳು ಸ್ವಲ್ಪ ಮಟ್ಟಿಗೆ ಪುನಶ್ಚೇತನ ಪಡೆದುಕೊಳ್ಳುತ್ತಿದೆ. ಆದರೆ ಸಮುದ್ರವನ್ನೇ ನಂಬಿ ಜೀವನ ನಡೆಸುವ ಮೀನುಗಾರರು ಮಾತ್ರ ಸಮಸ್ಯೆಯ ಸುಳಿಯಲ್ಲಿ ಸಿಲುಕಿ ಬದುಕಿನ ಬಂಡಿಯನ್ನು ನಡೆಸಲು ವ್ಯಥೆ ಪಡುವಂತಾಗಿದೆ.
ಮೀನುಗಾರರು ಎಂದೂ ಕೂಡ ಯಾರ ಬಳಿಯೂ ಸಹಾಯಕ್ಕಾಗಿ ಕೈಚಾಚುವವರಲ್ಲ, ಅವರು ಕಷ್ಟಪಟ್ಟು ದುಡಿದು ತಮ್ಮ ಜೀವನದ ಬಂಡಿಯನ್ನು ಸಾಗಿಸುವವರು.ಆದರೆ ಕೊರೋನಾ ಬಾಧಿಸಿದ ನಂತರ ಎಲ್ಲಾ ವರ್ಗದವರಂತೆ ಮೀನುಗಾರರೂ ಕೂಡ ಸಮಸ್ಯೆಯನ್ನ ಎದುರಿಸಿದರು. ಲಾಕ್ಡೌನ್ ಅವಧಿಯಲ್ಲಿ ಮೀನುಗಾರರೂ ಕೂಡ ಸಮುದ್ರಕ್ಕೆ ಇಳಿಯದಂತಾಗಿತ್ತು. ಮತ್ತೊಂದೆಡೆ ಸಮುದ್ರದ ಅಲೆಗಳ ಏರಿಳಿತ, ತೂಫಾನ್ ಇದೆಲ್ಲವೂ ಮೀನುಗಾರರನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸಿದೆ.
ಈ ಬಗ್ಗೆ ಉಡುಪಿ ಫಸ್ಟ್ ಜೊತೆ ಮೀನುಗಾರರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಕೆಲವು ದಿನಗಳಿಂದ ಹಂಗಾರಕಟ್ಟೆ ಬಂದರಿನಲ್ಲಿ 100 ಕ್ಕು ಅಧಿಕ ಬೋಟುಗಳು ಫಿಶಿಂಗ್ ಗೆ ತೆರಳದೆ ಬಂದರಿನಲ್ಲಿ ಲಂಗರು ಹಾಕಿವೆ. ಮೊದಲೇ ಕೋವಿಡ್ 19 ಕಾಯಿಲೆ ಬಂದು ಲಾಕ್ ಡೌನ್ ಕಾರಣಕ್ಕಾಗಿ ಫಿಶಿಂಗ್ ಗೆ ನಿರ್ಬಂಧ ಹೇರಿ ಮೀನುಗಾರಿಕ ಉದ್ಯಮ ನಷ್ಟಕ್ಕೆ ಸಿಲುಕಿದೆ. ಆದರೆ ಈ ವರ್ಷವು ಮೀನುಗಾರಿಕ ಉದ್ಯಮ ಚೇತರಿಕೆಗೊಳ್ಳುವ ಲಕ್ಷಣಗಳೇನು ಕಂಡು ಬರುತ್ತಿಲ್ಲ. .ಕಳೆದ ವರ್ಷ ಕೊವೀಡ್ 19 ಸಮಸ್ಯೇಯನ್ನ ತಂದೊಡಿತ್ತು,
ಈಗ, ಮೀನುಗಾರಿಕೆಗೆ ಪ್ರಾಕೃತಿಕ ವಿಕೋಪಗಳು ಅಧಿಕವಾಗಿ ಮೀನುಗಾರಿಕೆ ನಡೆಸಲು ಸಾಧ್ಯವಾಗುತ್ತಿಲ್ಲ. ಸಮುದ್ರದಲ್ಲಿ ತುಫಾನ್ ಅಧಿಕವಾಗಿದ್ದು ಇನ್ನೂ ಹತ್ತು ದಿನಗಳಿಗು ಅಧಿಕ ಕಾಲ ಮೀನುಗಾರಿಗೆ ಸಮುದ್ರಕ್ಕೆ ಇಳಿಯಲು ಸಾಧ್ಯವಿಲ್ಲ.
ಸರ್ಕಾರ ಮೀನುಗಾರಿಕ ಕುಟುಂಬಗಳಿಗೆ ನೆರವು ನೀಡಿ ಸಹಕರಿಸಬೇಕು. ಅದೆಷ್ಟೋ ಕುಟುಂಬಗಳು ಮೀನುಗಾರಿಕೆಯನ್ನೆ ನಂಬಿಕೊಂಡು ಕಷ್ಟದಲ್ಲಿ ಜೀವನ ನಡೆಸುತ್ತಿದೆ ಎಂದು ಬೋಟಿನ ಕಾರ್ಮಿಕರೊಬ್ಬರು ಉಡುಪಿ ಫಸ್ಟ್ ನ ಜೊತೆ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ವರದಿ:-ಉಡುಪಿ ಫಸ್ಟ್
TRENDING
-
ಉಡುಪಿ, ಮೇ ೯: ಕರಾವಳಿಯ ಗಂಡುಕಲೆ ಎಂದೇ ಖ್ಯಾತಿವೆತ್ತ ಯಕ್ಷಗಾನ ಕೇವಲ ಪುರಾಣ ಕಥೆಗಳಿಗೆ ಸೀಮಿತವಾಗದೆ ಸಮಕಾಲೀನ ವಿಷಯಗಳಿಗೂ ಸ್ಪಂದಿಸುತ್ತಿದೆ. ಇತ್ತೀಚೆಗೆ ಭಾರತ ಮತ್ತ...
-
ಉಡುಪಿ: ‘ಕಾಮಿಡಿ ಕಿಲಾಡಿಗಳು ಸೀಸನ್ -3’ ವಿನ್ನರ್ ಆಗಿದ್ದ ರಾಕೇಶ್ ಪೂಜಾರಿ ಅವರು ನಿಧನರಾಗಿದ್ದಾರೆ. ಕಾಮಿಡಿ ಕಿಲಾಡಿಗಳು ಸೀಸನ್ 3ಯಲ್ಲಿ ತಮ್ಮ ಅದ್ಭುತ ನಟನೆಯ ಮೂಲಕ ಮನ...
-
ಟೀಮ್ ಇಂಡಿಯಾದ ಸ್ಟಾರ್ ಆಟಗಾರ ರೋಹಿತ್ ಶರ್ಮಾ ಇತ್ತೀಚಿಗೆ ಟೆಸ್ಟ್ ಕ್ರಿಕೆಟ್ನಿಂದ ನಿವೃತ್ತಿ ಘೋಷಿಸಿದ್ದಾರೆ. ಈ ಸುದ್ದಿ ಇನ್ನು ಅಭಿಮಾನಿಗಳ ಮನದಲ್ಲಿ ಹಸಿರಾಗಿರುವಾ...
-
ನವದೆಹಲಿ: ಪಾಕಿಸ್ತಾನ ಕ್ಷಪಣಿ ದಾಳಿ ನಡೆಸಿದ ಬಳಿಕ ಉಭಯ ರಾಷ್ಟ್ರಗಳ ನಡುವೆ ಉದ್ವಿಗ್ನತೆ ಹೆಚ್ಚಾಗಿದೆ. ದೇಶಾದ್ಯಂತ 24 ವಿಮಾನ ನಿಲ್ದಾಣಗಳ ಕಾರ್ಯಾಚರಣೆಯನ್ನು ತಾತ್ಕಾಲಿಕ...
-
ಉಡುಪಿ,ಮೇ.11: ಅತಿಮಧ್ಯ ಸೇವನೆಯಿಂದ ಅಮಲೇರಿದ ಕುಡುಕನೊಬ್ಬ, ತನ್ನದೆ ಮನೆಗೆ ಬೆಂಕಿ ಹಿಡಿಸಿರುವ ಘಟನೆಯು, ನಗರದ ಹೊರವಲಯದ ಚಿಟ್ಪಾಡಿಯಲ್ಲಿ ರವಿವಾರ ನಡೆದಿದೆ. ಕುಡುಕ...
Slider
ಜಾಹೀರಾತಿಗಾಗಿ ಸಂಪರ್ಕಿಸಿ
ಫೋನ್: 86605 39735
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
Mega Menu
blogger
About Us
LABELS
© all rights reserved
made with by templateszoo
ಕಾಮೆಂಟ್ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ