Slider

ಜಾಹೀರಾತಿಗಾಗಿ ಸಂಪರ್ಕಿಸಿ

ಫೋನ್: 86605 39735

ಹಂಗಾರಕಟ್ಟೆ:-ಮತ್ತೆ ಲಂಗರು ಹಾಕಿದ ಬೋಟ್‌ಗಳು ಮೀನುಗಾರರ ಸಂಕಷ್ಟ ಕೇಳೋರೇ ಇಲ್ಲ

ಹಂಗಾರಕಟ್ಟೆ:-ಕೋವಿಡ್ ಕಾಲಾವಧಿಯ ನಂತರ ಈಗಷ್ಟೇ ವಾಣಿಜ್ಯ ವ್ಯಾಪಾರಗಳು ನಿಧಾನಗತಿಯಲ್ಲಿ ಚೇತರಿಸಿಕೊಳ್ಳುತ್ತಿದೆ. ಇಡೀ ವ್ಯಾಪಾರ ಕ್ಷೇತ್ರಕ್ಕೆ ಕೊರೋನಾ ನೀಡಿದ ಹೊಡೆತದಿಂದ ಉದ್ಯಮಗಳು ಸ್ವಲ್ಪ ಮಟ್ಟಿಗೆ ಪುನಶ್ಚೇತನ ಪಡೆದುಕೊಳ್ಳುತ್ತಿದೆ. ಆದರೆ ಸಮುದ್ರವನ್ನೇ ನಂಬಿ ಜೀವನ ನಡೆಸುವ ಮೀನುಗಾರರು ಮಾತ್ರ ಸಮಸ್ಯೆಯ ಸುಳಿಯಲ್ಲಿ ಸಿಲುಕಿ ಬದುಕಿನ ಬಂಡಿಯನ್ನು ನಡೆಸಲು ವ್ಯಥೆ ಪಡುವಂತಾಗಿದೆ.

ಮೀನುಗಾರರು ಎಂದೂ ಕೂಡ ಯಾರ ಬಳಿಯೂ ಸಹಾಯಕ್ಕಾಗಿ ಕೈಚಾಚುವವರಲ್ಲ, ಅವರು ಕಷ್ಟಪಟ್ಟು ದುಡಿದು ತಮ್ಮ ಜೀವನದ ಬಂಡಿಯನ್ನು ಸಾಗಿಸುವವರು.ಆದರೆ ಕೊರೋನಾ ಬಾಧಿಸಿದ ನಂತರ ಎಲ್ಲಾ ವರ್ಗದವರಂತೆ ಮೀನುಗಾರರೂ ಕೂಡ ಸಮಸ್ಯೆಯನ್ನ ಎದುರಿಸಿದರು. ಲಾಕ್‌ಡೌನ್ ಅವಧಿಯಲ್ಲಿ ಮೀನುಗಾರರೂ ಕೂಡ ಸಮುದ್ರಕ್ಕೆ ಇಳಿಯದಂತಾಗಿತ್ತು. ಮತ್ತೊಂದೆಡೆ ಸಮುದ್ರದ ಅಲೆಗಳ ಏರಿಳಿತ, ತೂಫಾನ್ ಇದೆಲ್ಲವೂ ಮೀನುಗಾರರನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸಿದೆ.

ಈ ಬಗ್ಗೆ ಉಡುಪಿ ಫಸ್ಟ್ ಜೊತೆ ಮೀನುಗಾರರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಕೆಲವು ದಿನಗಳಿಂದ ಹಂಗಾರಕಟ್ಟೆ ಬಂದರಿನಲ್ಲಿ 100 ಕ್ಕು ಅಧಿಕ ಬೋಟುಗಳು ಫಿಶಿಂಗ್ ಗೆ ತೆರಳದೆ ಬಂದರಿನಲ್ಲಿ ಲಂಗರು ಹಾಕಿವೆ. ಮೊದಲೇ ಕೋವಿಡ್ 19 ಕಾಯಿಲೆ ಬಂದು ಲಾಕ್ ಡೌನ್ ಕಾರಣಕ್ಕಾಗಿ ಫಿಶಿಂಗ್ ಗೆ ನಿರ್ಬಂಧ ಹೇರಿ ಮೀನುಗಾರಿಕ ಉದ್ಯಮ ನಷ್ಟಕ್ಕೆ ಸಿಲುಕಿದೆ. ಆದರೆ ಈ ವರ್ಷವು ಮೀನುಗಾರಿಕ ಉದ್ಯಮ ಚೇತರಿಕೆಗೊಳ್ಳುವ ಲಕ್ಷಣಗಳೇನು ಕಂಡು ಬರುತ್ತಿಲ್ಲ. .ಕಳೆದ ವರ್ಷ ಕೊವೀಡ್ 19 ಸಮಸ್ಯೇಯನ್ನ ತಂದೊಡಿತ್ತು,

ಈಗ, ಮೀನುಗಾರಿಕೆಗೆ ಪ್ರಾಕೃತಿಕ ವಿಕೋಪಗಳು ಅಧಿಕವಾಗಿ ಮೀನುಗಾರಿಕೆ ನಡೆಸಲು ಸಾಧ್ಯವಾಗುತ್ತಿಲ್ಲ. ಸಮುದ್ರದಲ್ಲಿ ತುಫಾನ್ ಅಧಿಕವಾಗಿದ್ದು ಇನ್ನೂ ಹತ್ತು ದಿನಗಳಿಗು ಅಧಿಕ ಕಾಲ ಮೀನುಗಾರಿಗೆ ಸಮುದ್ರಕ್ಕೆ ಇಳಿಯಲು ಸಾಧ್ಯವಿಲ್ಲ.

ಸರ್ಕಾರ ಮೀನುಗಾರಿಕ ಕುಟುಂಬಗಳಿಗೆ ನೆರವು ನೀಡಿ ಸಹಕರಿಸಬೇಕು. ಅದೆಷ್ಟೋ ಕುಟುಂಬಗಳು ಮೀನುಗಾರಿಕೆಯನ್ನೆ ನಂಬಿಕೊಂಡು ಕಷ್ಟದಲ್ಲಿ ಜೀವನ ನಡೆಸುತ್ತಿದೆ ಎಂದು ಬೋಟಿನ ಕಾರ್ಮಿಕರೊಬ್ಬರು ಉಡುಪಿ ಫಸ್ಟ್ ನ ಜೊತೆ ತಮ್ಮ ಅಳಲನ್ನು ‌ತೋಡಿಕೊಂಡಿದ್ದಾರೆ.

ವರದಿ:-ಉಡುಪಿ ಫಸ್ಟ್
0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo