Slider

ಜಾಹೀರಾತಿಗಾಗಿ ಸಂಪರ್ಕಿಸಿ

ಫೋನ್: 86605 39735

ಶಂಕರನಾರಾಯಣ:-ಪಿಡಬ್ಲ್ಯುಡಿ ಗುತ್ತಿಗೆದಾರರಿಗೆ ನಂಬಿಸಿ ವಂಚನೆ 5-1-2022

ಶಂಕರನಾರಾಯಣ : ಕಡಿಮೆ ಬಡ್ಡಿದರದಲ್ಲಿ ಸಾಲ ತೆಗೆಸಿಕೊಡುವುದಾಗಿ ಪಿಡಬ್ಲ್ಯುಡಿ ಗುತ್ತಿಗೆದಾರರೊಬ್ಬರನ್ನು ನಂಬಿಸಿ 28 ಲಕ್ಷ ರೂ. ವಂಚಿಸಿರುವ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಿಡಬ್ಲುಡಿ ಗುತ್ತಿಗೆದಾರ ಸಂತೋಷ ಕುಮಾರ್ ಶೆಟ್ಟಿ ಎನ್ನುವವರಿಗೆ ಆರೋಪಿಗಳಾದ ಮಣಿಪಾಲದ ಲ್ಯಾನ್ಸಿ ರಾಜ್(45) ಹಾಗೂ ಉಜಿರೆಯ ಗಂಗಾಧರ ರಾವ್ (50) ಎಂಬವರು 2021ರ ಜನವರಿ.10 ರಂದು ಬಂದು ಒಂದು ಕೋಟಿ ರೂಪಾಯಿ ಮೌಲ್ಯದ ಹಣವನ್ನು ಕಡಿಮೆ ಬಡ್ಡಿದರದಲ್ಲಿ ಸಾಲ ತೆಗೆಸಿಕೊಡುವುದಾಗಿ ನಂಬಿಸಿದ್ದರು.

ಬಳಿಕ ಅವರಿಂದ 28 ಲಕ್ಷ ರೂ. ಹಣವನ್ನು ಸಾಲದ ಕಾಗದ ಪತ್ರ ಮಾಡಲು ಎಂದು ಹೇಳಿ ಪಡೆದುಕೊಂಡು ಹೋಗಿದ್ದರು. ಆ ಬಳಿಕ ಆರೋಪಿ ಗಳು ಸಾಲವನ್ನು ತೆಗೆಯಿಸಿಕೊಡದೆ ಪಡೆದ ಹಣವನ್ನು ಕೂಡ ವಾಪಾಸು ನೀಡದೆ ಮೋಸ ಮಾಡಿರುವುದಾಗಿ ದೂರಲಾಗಿದೆ.
ವರದಿ:-ಉಡುಪಿ ಫಸ್ಟ್
0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo