ಉಡುಪಿ:- ಜನವರಿ 17ರ ಮತ್ತು ಜನವರಿ 18 ರಂದು ನಡೆಯಲಿರುವ ಪರ್ಯಾಯ ಮಹೋತ್ಸವಕ್ಕೆ ಉಡುಪಿ ಜಿಲ್ಲಾ ಪೊಲೀಸ್ ಸಂಪೂರ್ಣ ಬಂದೋಬಸ್ತ್ ವ್ಯವಸ್ಥೆ ಮಾಡಿರುವುದಾಗಿ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಎನ್ ವಿಷ್ಣುವರ್ಧನ್ ಹೇಳಿಕೆ ನೀಡಿದ್ದಾರೆ.
ಪರ್ಯಾಯ ಬಂದೋಬಸ್ತ್ ಪ್ರಯುಕ್ತ ಎಸ್ಪಿ, ಹೆಚ್ಚುವರಿ ಎಸ್ಪಿ ಸೇರಿದಂತೆ ಡಿವೈಎಸ್ಪಿಯಿಂದ ಪಿಎಸ್ ಐ ಹಂತದ 70 ಮಂದಿ ಅಧಿಕಾರಿಗಳು, 60 ಮಂದಿ ಎಎಸೈಗಳು, 60 ಡಬ್ಲ್ಯೂಹೆಚ್ ಸಿ./ಡಬ್ಲ್ಯೂಪಿಸಿ, 650 ಕಾನ್ಸ್ ಟೇಬಲ್ ಗಳು, 4 ಎಎಸ್.ಸಿ ತಂಡ, 7 ಡಿಎಆರ್ ತಂಡ, 2 ಕೆ ಎಸ್ ಆರ್ ಪಿ ಮತ್ತು ಒಂದು ಕ್ವಿಕ್ ರೆಸ್ಪಾನ್ಸ್ ತಂಡವನ್ನು ಬಂದೋಬಸ್ತಿಗಾಗಿ ನಿಯೋಜನೆಗೊಳಿಸಿಲಾಗಿದೆ. ಜನತೆ ಪರ್ಯಾಯದ ಅವಧಿಯಲ್ಲಿ ಪೊಲೀಸರೊಂದಿಗೆ ಬಂದೋಬಸ್ತ್ ವಿಚಾರದಲ್ಲಿ ಸಹಕರಿಸುವಂತೆ ಅವರು ಮನವಿ ಮಾಡಿದ್ದಾರೆ.
ಕಾಮೆಂಟ್ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ