Slider

ಜಾಹೀರಾತಿಗಾಗಿ ಸಂಪರ್ಕಿಸಿ

ಫೋನ್: 86605 39735

ಉಡುಪಿ : ಮಾಬುಕಳ ಸೇತುವೆ ಬಳಿ ಬೈಕು ನಿಲ್ಲಿಸಿ ನಿಲ್ಲಿಸಿದ ನಾಪತ್ತೆಯಾದ ವ್ಯಕ್ತಿ ಶವವಾಗಿ ಪತ್ತೆ 14.08.2022

 ಉಡುಪಿ : ನಗರದ ಆದಿಉಡುಪಿಯ ಆರ್.ಟಿ.ಓ ಏಜೆಂಟ್ ಆಗಿದ್ದ ಒಬ್ಬರು ಎರಡು ದಿನಗಳ ಹಿಂದೆ ನಾಪತ್ತೆಯಾಗಿದ್ದರು. 



ಆದರೆ ಇದೀಗ ಅವರ ಮೃತದೇಹ ನದಿಯಲ್ಲಿ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.



ಉಡುಪಿಯ ಕೊಡಂಕೂರು ನಿವಾಸಿಯಾಗಿರುವ ಆಶೋಕ್ ಸುವರ್ಣ ಅವರು ಮೃತಪಟ್ಟ ವ್ಯಕ್ತಿ ಎಂದು ತಿಳಿದು ಬಂದಿದೆ.



ಆಶೋಕ್ ಸುವರ್ಣ ಅವರು ವೃತ್ತಿಯಲ್ಲಿ ಆದಿಉಡುಪಿ ಪರಿಸರದಲ್ಲಿ ಆರ್.ಟಿ.ಓ ಏಜೆಂಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದು ತುಂಬಾ ಹೆಸರುವಾಸಿಯಾಗಿದ್ದರು.


ಎರಡು ದಿನಗಳ ಹಿಂದೆ ಮಾಬುಕಳ ಸೇತುವೆ ಬಳಿ ಬೈಕ್ ನಿಲ್ಲಿಸಿ ನಾಪತ್ತೆಯಾಗಿದ್ದರು. ಆದರೆ ಈಗ ಅವರು ಶವವಾಗಿ ಪತ್ತೆಯಾಗಿದ್ದಾರೆ. ಇವರ ಸಾವಿನ ಕುರಿತು ನಿಖರವಾದ ಮಾಹಿತಿ ಲಭ್ಯವಾಗಿಲ್ಲ.

ಘಟನೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.





0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo