ಬ್ರಹ್ಮಾವರ: ಅವಳಿ ಜವಳಿ ಮಕ್ಕಳ ಪೈಕಿ ಮೂರು ತಿಂಗಳ ಹೆಣ್ಣು ಮಗು ಮಲಗಿದ್ದಲ್ಲಿಯೇ ಮೃತಪಟ್ಟ ಘಟನೆ ಹೆಗ್ಗುಂಜೆ ಗ್ರಾಮದ ಹೊರ್ಲಿ ಜೆಡ್ಡುವಿನ ಜಾನುವಾರುಕಟ್ಟೆ ಎಂಬಲ್ಲಿ ಆ.11ರಂದು ತಡರಾತ್ರಿ ವೇಳೆ ನಡೆದಿದೆ.
ಜಾನುವಾರುಕಟ್ಟೆಯ ವಾಣಿ ಎಂಬವರ ಮೂರು ತಿಂಗಳ ಹೆಣ್ಣು ಮಗು ರಿಷಿಕಾ ಮೃತ ದುದೈರ್ವಿ. ವಾಣಿ ಮೊದಲು ಅವಳಿ ಜವಳಿ ಮಕ್ಕಳ ಪೈಕಿ ಮೊದಲು ಗಂಡು ಮಗುವಿಗೆ ಹಾಲು ಕುಡಿಸಿ ಮಲಗಿಸಿ, ನಂತರ ಹೆಣ್ಣು ಮಗುವಿಗೆ ಹಾಲು ಕುಡಿಸಲು ಹೋದಾಗ ಮಗು ಯಾವುದೇ ಪ್ರತಿಕ್ರಿಯೆ ಇಲ್ಲದೇ, ದೇಹ ತಣ್ಣಾಗಾಗಿರುವುದು ಕಂಡುಬಂತು. ಕೂಡಲೇ ಮಗವನ್ನು ಬ್ರಹ್ಮಾವರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು, ಅಲ್ಲಿ ಪರೀಕ್ಷಿಸಿದ ವೈದ್ಯರು ಮಗು ಮೃತಪಟ್ಟಿರುವುದಾಗಿ ತಿಳಿಸಿದರು. ಮಗು ರಿಷಿಕಾ ಯಾವುದೋ ಖಾಯಿಲೆಯಿಂದ ಮೃತಪಟ್ಟಿರಬಹುದು ಎಂದು ತಿಳಿದುಬಂದಿದೆ.
ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಮೆಂಟ್ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ