Slider

ಜಾಹೀರಾತಿಗಾಗಿ ಸಂಪರ್ಕಿಸಿ

ಫೋನ್: 86605 39735

ಬಾಳ್ಕುದ್ರು: ಸರ್ವೋದಯ ಯುವಕ ಮಂಡಲ ಮತ್ತು ಮಹಿಳಾ ಮಂಡಳದ ಆಶ್ರಯದಲ್ಲಿ ಗ್ರಾಮೀಣ ಕ್ರೀಡಾಕೂಟ 2023

kannada news kannada news paper kannada news today - ಕನ್ನಡ ನ್ಯೂಸ್ ಟುಡೇ kannada news channel today kannada news dailyhunt kannada news kannada news a

 ಬಾಳ್ಕುದ್ರು : ಸರ್ವೋದಯ ಯುವಕ ಮಂಡಲ ಮತ್ತು ಮಹಿಳಾ ಮಂಡಳದ ಜಂಟಿ ಆಶ್ರಯದಲ್ಲಿ ಗಣೇಶ ಚತುರ್ಥಿ ಹಬ್ಬದ ಪ್ರಯುಕ್ತ ಗ್ರಾಮೀಣ ಕ್ರೀಡಾಕೂಟ 2023 ಅನ್ನು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬಾಳ್ಕುದ್ರುವಿನಲ್ಲಿ ನಡೆಸಲಾಯಿತು. 

ಗ್ರಾಮೀಣ ಕ್ರೀಡಾಕೂಟ 2023ನ್ನು ಶ್ರೀ ಯುತ ರೆಹಮಾನ್ ಸಾಹೇಬರು ಉದ್ಘಾಟಿಸಿ ಕ್ರೀಡೆಯು ನಮ್ಮ ಅವಿಭಾಜ್ಯ ಅಂಗ. ಕ್ರೀಡೆಯಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಂಡರೆ ಮುಂದೊಂದು ದಿನ ಉಜ್ವಲ ಭವಿಷ್ಯವಿದೆ ಎಂದು ಹೇಳಿದರು‌‌. ನಂತರ ಸಭೆಯಲ್ಲಿ ಸ.ಹಿ.ಪ್ರಾ. ಶಾಲೆ ಬಾಳ್ಕುದ್ರುವಿನ ಹೆಸರಾಂತ ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀಯುತ ಶ್ರೀಕಾಂತ್ ಸಾಮಂತ್ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.


ನಂತರ ಅತಿಥಿ ಅಬ್ಯಾಗತರು ವಿಕೆಟ್ ಗೆ ಚೆಂಡನ್ನು ಎಸೆಯುವ ಮೂಲಕ ಗ್ರಾಮೀಣ ಕ್ರೀಡಾಕೂಟ 2023ನ್ನು ಉದ್ಘಾಟಿಸಿ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಸಭೆಯಲ್ಲಿ ಹೆಚ್. ರೆಹಮಾನ್ ಸಾಹೇಬ್, ಗೋಪಾಲಕೃಷ್ಣ ಉಡುಪಿ ಮಾಲೀಕರು ಸಕಾಲಿಕ ಎಂಟರ್ಪ್ರೈಸಸ್ ಬಾಳ್ಕುದ್ರು, ಶ್ರೀ ಕಾಂತ್ ಮಧ್ಯಸ್ಥ, ಶ್ರೀ ಮತಿ ಕುಸುಮಾ ಮುಖ್ಯೋಪಾಧ್ಯಾಯ ಸ.ಹಿ.ಪ್ರಾ.ಶಾಲೆ. ಬಾಳ್ಕುದ್ರು, ಹೆಚ್ .ವಿನಯ್ ಶಾಲಾ ಶತಮಾನೋತ್ಸವ ಸಮಿತಿಯ ಅಧ್ಯಕ್ಷರು, ಸುಬ್ರಹ್ಮಣ್ಯ ಆಚಾರ್ಯ ಐರೋಡಿ ಗ್ರಾಮ ಪಂಚಾಯತ್ ಸದಸ್ಯರು, ಕುಸುಮಾ ಪೂಜಾರಿ ಶಾಲಾ ಮೇಲುಸ್ತುವಾರಿ ಸಮಿತಿ ಅಧ್ಯಕ್ಷರು, ರವೀಂದ್ರ ಸುವರ್ಣ ಬಿಲ್ಲವ ಸಂಘದ ಮುಂದಾಳು, ರೇಖಾ.ಪಿ.ಸುವರ್ಣ ಮತ್ತು ಅನುಸೂಯ ಟೀಚರ್ ಅಧ್ಯಕ್ಷರು ಮಹಿಳಾ ಮಂಡಳಿ, ಸರ್ವೋದಯ ಯುವಕ ಮಂಡಲದ ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಉಪಸ್ಥಿತರಿದ್ದರು.
0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo