Slider

ಜಾಹೀರಾತಿಗಾಗಿ ಸಂಪರ್ಕಿಸಿ

ಫೋನ್: 86605 39735

ಎಲ್ಲಾ ಮಾದರಿಯ ಕ್ರಿಕೆಟ್‌ಗೆ ಗುಡ್‌ಬೈ ಹೇಳಿದ ಕೇರಳ ಎಕ್ಸ್‌ಪ್ರೆಸ್ ಶ್ರೀಶಾಂತ್ 9-3-2022

ಕೇರಳ ಎಕ್ಸ್​ಪ್ರೆಸ್​ ಎಂದೇ ಖ್ಯಾತಿಯಾಗಿದ್ದ ಎಸ್​. ಶ್ರೀಶಾಂತ್​ ತಮ್ಮ ಕ್ರಿಕೆಟ್​ ಬದುಕಿಗೆ ನಿವೃತ್ತಿ ಘೋಷಿಸಿದ್ದಾರೆ. 2011 ರ ಐಸಿಸಿ ವಿಶ್ವಕಪ್ ವಿಜೇತ ತಂಡದ ಸದಸ್ಯರಾಗಿದ್ದ ಶ್ರೀಶಾಂತ್, ದೇಶೀಯ ಕ್ರಿಕೆಟ್​ನ ಎಲ್ಲಾ ಮಾದರಿಗೆ ನಿವೃತ್ತಿ ಘೋಷಿಸಿರುವುದಾಗಿ ಟ್ವೀಟ್​ ಮಾಡಿದ್ದಾರೆ.

ಇಂದು ನನಗೆ ಕಷ್ಟದ ದಿನವಾಗಿದೆ. ಆದರೆ, ಇಂತಹದೊಂದು ದಿನ ಬಂದೇ ಬರಲಿದೆ ಎಂದು ತಿಳಿದಿದ್ದೆ. ಭಾರತ ತಂಡ ಸೇರಿದಂತೆ ವಿವಿಧ ತಂಡಗಳ ಜೊತೆ ಆಡಿದ ದಿನಗಳು ಸ್ಮರಣೀಯ. ಇದೀಗ ನನ್ನ 25 ವರ್ಷಗಳ ಕ್ರಿಕೆಟ್​ ಜೀವನದಿಂದ ದೂರ ಸರಿದು, ಕುಟುಂಬದೊಂದಿಗೆ ಕಾಲ ಕಳೆಯಲು ಇಚ್ಚಿಸಿದ್ದೇನೆ. ತಂಡದಲ್ಲಿ ಆಡಲು ಅವಕಾಶ ಮಾಡಿಕೊಟ್ಟ ಐಸಿಸಿ, ಬಿಸಿಸಿಐಗೆ ಧನ್ಯವಾದಗಳು ಎಂದು ಟ್ವೀಟ್​ನಲ್ಲಿ ಬರೆದುಕೊಂಡಿದ್ದಾರೆ.

ಕೇರಳದ ವೇಗದ ಬೌಲರ್​ ಎಸ್​. ಶ್ರೀಶಾಂತ್ 27 ಟೆಸ್ಟ್, 53 ಏಕದಿನ ಮತ್ತು 10 ಟಿ-20 ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಅವರು 2007ರಲ್ಲಿ ಟಿ-20 ವಿಶ್ವಕಪ್​ ಮತ್ತು 2011 ರ ಏಕದಿನ ವಿಶ್ವಕಪ್​ ಗೆದ್ದ ಭಾರತದ ತಂಡದಲ್ಲಿದ್ದರು. ಇದಲ್ಲದೇ, ಇಸಿಸಿ, ಎರ್ನಾಕುಲಂ ಜಿಲ್ಲಾ ತಂಡ, ಲೀಗ್ ಮತ್ತು ಟೂರ್ನಮೆಂಟ್ ತಂಡಗಳು, ಕೇರಳ ರಾಜ್ಯ ಕ್ರಿಕೆಟ್ ಸಂಸ್ಥೆ, ವಾರ್ವಿಕ್‌ಷೈರ್ ಕೌಂಟಿ ಕ್ರಿಕೆಟ್ ತಂಡ, ಇಂಡಿಯನ್ ಏರ್‌ಲೈನ್ಸ್ ಕ್ರಿಕೆಟ್ ತಂಡದಲ್ಲಿ ಆಡಿದ್ದಾರೆ.
0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo