ಉಡುಪಿ: ಮನೆಗೆ ತೆರಳುತ್ತಿದ್ದಾಗ ಯುವಕನಿಗೆ ರೇಲ್ವೆ ಡಿಕ್ಕಿ ಹೊಡೆದು ಸಾವನ್ನಪ್ಪಿರೋ ದುರ್ಘಟನೆ ಜಿಲ್ಲೆಯ ಬೈಂದೂರು ತಾಲೂಕಿನ ಬಂಕೇಶ್ವರದಲ್ಲಿ ನಡೆದಿದೆ. ಸಂತೋಷ್ (28) ಮೃತ ದುರ್ದೈವಿ ಎಂದು ಗುರುತಿಸಲಾಗಿದೆ.
ಬಂಕೇಶ್ವರದಿಂದ ತಮ್ಮ ನಿವಾಸಕ್ಕೆ ಸಂತೋಷ್ ತೆರಳುತ್ತಿದ್ದರು. ಈ ವೇಳೆ ರಭಸವಾಗಿ ಬಂದ ರೈಲು ಸಂತೋಷ್ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ದೇಹವು ಛಿದ್ರ, ಛಿದ್ರವಾಗಿ ಬಿದ್ದಿದೆ.
ಬಳಿಕ ಛಿದ್ರಗೊಂಡ ದೇಹವನ್ನ ಆರಿಸಿಕೊಂಡು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಈ ಸಂಬಂಧ ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕಾಮೆಂಟ್ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ