Slider

ಜಾಹೀರಾತಿಗಾಗಿ ಸಂಪರ್ಕಿಸಿ

ಫೋನ್: 86605 39735

ಬ್ರಹ್ಮಾವರ:-ಸಾಲ ಮರುಪಾವತಿಗೆ ಸೊಸೈಟಿಯಿಂದ ನೋಟೀಸ್ ; ವ್ಯಕ್ತಿ ಆತ್ಮಹತ್ಯೆ

Udupifirst-udupinews-


ಬ್ರಹ್ಮಾವರ:- ಸಾಲ ಮರುಪಾವತಿ ಸಂಬಂಧ ಸೊಸೈಟಿಯಿಂದ  ಬಂದ ನೋಟೀಸ್‌ನಿಂದ ಮನನೊಂದ ರಿಕ್ಷಾ ಚಾಲಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಹೊಸೂರು ಗ್ರಾಮದ ತಡಾಲು ಎಂಬಲ್ಲಿ ನಡೆದಿದೆ.

ಮೃತರನ್ನು ಹೊಸೂರು ಗ್ರಾಮದ ಕರ್ಜೆ ನಿವಾಸಿ ವನಜ ಪೂಜಾತ್ತಿ ಎಂಬವರ ಮಗ ಪ್ರಕಾಶ (23) ಎಂದು ಗುರುತಿಸಲಾಗಿದೆ.

ರಿಕ್ಷಾ ಮಾರಾಟ ಮಾಡಿ ಮನೆಯಲ್ಲಿಯೇ ಇದ್ದು ಮದ್ಯ ಸೇವನೆ ಮಾಡಿಕೊಂಡಿದ್ದ ಪ್ರಕಾಶ್, ಪೇತ್ರಿ ಸೊಸೈಟಿ ಯಿಂದ 1 ಲಕ್ಷ ಸಾಲ ಪಡೆದುಕೊಂಡಿದ್ದನು. 2 ವಾರಗಳ ಹಿಂದೆ ಸಾಲ ಮರು ಪಾವತಿಯ ಬಗ್ಗೆ ಮನೆಗೆ ನೋಟಿಸು ಬಂದಿದ್ದು, ಇದರಿಂದ ಬೇಸರ ಗೊಂಡು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.






0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo