ಉಡುಪಿ: 43ನೆಯ ರಾಜ್ಯ ಮಟ್ಟದ ಕನ್ನಡ ನಾಟಕ ಸ್ಪರ್ಧೆ -2022 ಜಿಲ್ಲೆಯ ಎಂ.ಜಿ.ಎಂ ಕಾಲೇಜು ಕುಂಜಿಬೆಟ್ಟುವಿನಲ್ಲಿ ನಡೆದಿದ್ದು ಸ್ಪರ್ಧೆಯ ಫಲಿತಾಂಶ ಈ ಕೆಳಗಿನಂತಿವೆ.
ಪ್ರಥಮ ಬಹುಮಾನವು "ಶ್ರೀ ಗಜಾನನ ಯುವಕ ಮಂಡಲ (ರಿ.) ಶೇಷಗಿರಿ, ಹಾವೇರಿ " ತಂಡದ "ವಾಲಿವಧೆ " ನಾಟಕಕ್ಕೆ ಲಭಿಸಿದೆ. ಈ ತಂಡವು ಪಿ.ವಿ.ಎಸ್. ಬೀಡೀಸ್ ಪ್ರಾಯೋಜಿತ ದಿ.ಪುತ್ತು ವೈಕುಂಠ ಶೇಟ್ ಸ್ಮಾರಕ ಪ್ರಥಮ ನಗದು ಬಹುಮಾನ ರೂ.35,000/- ಮತ್ತು ಸ್ಮರಣಿಕೆ ಮತ್ತು ಡಾ| ಟಿ.ಎಮ್.ಎ.ಪೈ ಸ್ಮಾರಕ ಪರ್ಯಾಯ ಫಲಕ ಹಾಗೂ ದಿ| ಎಸ್. ಎಲ್. ನಾರಾಯಣ ಭಟ್ ಸ್ಮಾರಕ ಸ್ಮರಣಿಕೆ ತನ್ನದಾಗಿಸಿಕೊಂಡಿದೆ.
ದ್ವಿತೀಯ ಬಹುಮಾನವಾದ ದಿ| ಮಲ್ಪೆ ಮಧ್ವರಾಜ್ ಸ್ಮಾರಕ ಪ್ರಮೋದ್ ಮಧ್ವರಾಜ್ ರವರ ಕೊಡುಗೆಯಾದ ರೂ.25,000/- ನಗದು ಬಹುಮಾನ ಮತ್ತು ಸ್ಮರಣಿಕೆ ಹಾಗೂ ಡಾ. ಆರ್.ಪಿ. ಕೊಪ್ಪೀಕರ್ ಸ್ಮಾರಕ ಪರ್ಯಾಯ ಫಲಕ ಮತ್ತು ಯು.ಪಿ. ಶೆಣೈ ಸ್ಮಾರಕ ಸ್ಮರಣಿಕೆ "ನಟಮಿತ್ರರು (ರಿ.) ತೀರ್ಥಹಳ್ಳಿ” ತಂಡದ "ತುರುಬ ಕಟ್ಟುವ ಹದನ " ನಾಟಕಕ್ಕೆ ಲಭಿಸಿದೆ.
ತೃತೀಯ ಬಹುಮಾನವನ್ನು "ಮಂದಾರ (ರಿ.) ಬೈಕಾಡಿ, ಉಡುಪಿ" ತಂಡದ "ಕೊಳ್ಳಿ " ನಾಟಕವು ಪಡೆದು ಕೊಂಡಿದ್ದು, ದಿ| ಪಿ. ವಾಸುದೇವ ರಾವ್ ಅವರ ಸ್ಮರಣಾರ್ಥ ಶ್ರೀಮತಿ ಸೀತಾ ವಾಸುದೇವ ರಾವ್ ಅವರ ಕೊಡುಗೆಯಾದ ನಗದು ಬಹುಮಾನವಾದ ರೂ.15,000/- ಮತ್ತು ಸಖೂಬಾಯಿ ಶ್ರೀಧರ ನಾಯಕ್ ಕೊಕ್ಕರ್ಣೆ ಸ್ಮಾರಕ ಸ್ಮರಣಿಕೆಗೆ ಪಾತ್ರವಾಗಿದೆ.
ಬಹುಮಾನಗಳ ವಿವರ :
ಶ್ರೇಷ್ಠ ನಿರ್ದೇಶನ :
ಪ್ರಥಮ : ರಂಗ ನಿರ್ದೇಶಕ ದಿ|ಕುತ್ಪಾಡಿ ವೆಂಕಟಾಚಲ ಭಟ್ ಸ್ಮಾರಕ ರೂ.5,000 ನಗದು ಮತ್ತು ದಿ| ಜಿ.ಕೆ. ಐತಾಳ್ ಸ್ಮಾರಕ ನಗದು ರೂ.5,000 ಸೇರಿದಂತೆ ಒಟ್ಟು ರೂ.10,000/- ನಗದು ಹಾಗೂ ಡಾ.ಟಿ.ಎಂ.ಎ.ಪೈ ಸ್ಮಾರಕ ಪರ್ಯಾಯ ಫಲಕ
ಮತ್ತು ಮಲ್ಪೆ ಮಧ್ವರಾಜ್ ಸ್ಮಾರಕ ಸ್ಮರಣಿಕೆ -
ಶ್ರೇಷ್ಠ ನಿರ್ದೇಶಕ - ಶ್ರೀ ಗಣೇಶ್ ಮಂದಾರ್ತಿ
ನಾಟಕ - ವಾಲಿವಧೆ
ತಂಡ - ಶ್ರೀ ಗಜಾನನ ಯುವಕ ಮಂಡಲ (ರಿ.) ಶೇಷಗಿರಿ, ಹಾವೇರಿ.
ದ್ವಿತೀಯ : ದಿ| ಕುತ್ಪಾಡಿ ವೆಂಕಟಾಚಲ ಭಟ್ ಸ್ಮಾರಕ ನಗದು ಬಹುಮಾನ ರೂ.3,000 ಮತ್ತು ದಿ| ಜಿ.ಕೆ. ಐತಾಳ್ ಸ್ಮಾರಕ ನಗದು ರೂ.3,000 ಸೇರಿದಂತೆ ಒಟ್ಟು ₹ 6,000/- ಹಾಗೂ ದಿ|ವಿ. ಪ್ರಭಾಕರ ಹೆಗ್ಡೆ ಸ್ಮಾರಕ ಸ್ಮರಣಿಕೆ.
ನಿರ್ದೇಶಕ ದ್ವಿತೀಯ - ಶ್ರೀಕಾಂತ್ ಕುಮುಟಾ
ನಾಟಕ – ತುರುಬ ಕಟ್ಟುವ ಹದನ
ತಂಡ - ನಟಮಿತ್ರರು (ರಿ.) ತೀರ್ಥಹಳ್ಳಿ
ಶ್ರೇಷ್ಠ ನಿರ್ದೇಶನ ತೃತೀಯ* : ದಿ| ಕುತ್ಪಾಡಿ ವೆಂಕಟಾಚಲ ಭಟ್ ಸ್ಮಾರಕ ನಗದು ಬಹುಮಾನ ರೂ.2,000 ಮತ್ತುದಿ|ಜಿ.ಕೆ. ಐತಾಳ್ ಸ್ಮಾರಕ ರೂ.2000 ಸೇರಿದಂತೆ ಒಟ್ಟು ₹ 4,000/- ಡಾ. ಬಿ.ಬಿ. ಶೆಟ್ಟಿ ಸ್ಮಾರಕ ಸ್ಮರಣಿಕೆ.
ನಿರ್ದೇಶಕ - ಶ್ರೀ ಜೋಸೆಫ್ ಜಾನ್
ನಾಟಕ - ತದ್ರೂಪಿ
ತಂಡ - ಸಂಚಯ ಟ್ರಸ್ಟ್, ಬೆಂಗಳೂರು
ಶ್ರೇಷ್ಠ ನಟ :
ಪ್ರಥಮ :ದಿ| ಪಾಡಿಗಾರು ಶೀನ ಶೆಟ್ಟಿ ಸ್ಮರಣಾರ್ಥ ನಗದು ಬಹುಮಾನ ರೂ.3,000 ಮತ್ತು ಅಂಬಲಪಾಡಿ ಜನಾರ್ದನ ಮತ್ತು ಮಹಾಕಾಳಿ ದೇವಸ್ಥಾನ ಪ್ರಾಯೋಜಿತ ಸ್ಮರಣಿಕೆ -
“ಶ್ರೀ ಗಜಾನನ ಯುವಕ ಮಂಡಲ (ರಿ.) ಶೇಷಗಿರಿ, ಹಾವೇರಿ" ತಂಡದ "ವಾಲಿವಧೆ" ನಾಟಕದ "ವಾಲಿ " ಪಾತ್ರಧಾರಿ "ದೇವಿ ಪ್ರಸಾದ ವೈ. "
ದ್ವಿತೀಯ : ದಿ|ಪಾಡಿಗಾರು ಶೀನ ಶೆಟ್ಟಿ ಸ್ಮರಣಾರ್ಥ ನಗದು ಬಹುಮಾನ ರೂ.2,000 ಮತ್ತು ಅಂಬಲಪಾಡಿ ಜನಾರ್ದನ ಮತ್ತು ಮಹಾಕಾಳಿ ದೇವಸ್ಥಾನ ಪ್ರಾಯೋಜಿತ ಸ್ಮರಣಿಕೆ -
“ಶ್ರೀ ಗಜಾನನ ಯುವಕ ಮಂಡಲ (ರಿ.) ಶೇಷಗಿರಿ, ಹಾವೇರಿ “ ತಂಡದ "ವಾಲಿವಧೆ" ನಾಟಕದ "ಸುಗ್ರೀವ " ಪಾತ್ರಧಾರಿ "ಸಿದ್ದು ಎಸ್. ಕೆ. "
ತೃತೀಯ : ದಿ|ಪಾಡಿಗಾರು ಶೀನ ಶೆಟ್ಟಿ ಸ್ಮರಣಾರ್ಥ ನಗದು ಬಹುಮಾನ ರೂ.1,000 ಮತ್ತು ರೋಟರಿ ಕ್ಲಬ್ ಉಡುಪಿ-ಮಣಿಪಾಲ
ಪ್ರಾಯೋಜಿತ ಸ್ಮರಣಿಕೆ -
" ಸಂಚಯ ಟ್ರಸ್ಟ್, ಬೆಂಗಳೂರು" ತಂಡದ "ತದ್ರೂಪಿ" ನಾಟಕದ "ಜನರಲ್ ಪೋಪಟ್ " ಪಾತ್ರಧಾರಿ "ಕೀರ್ತಿಭಾನು ಎಂ.ವಿ.".
ಶ್ರೇಷ್ಠ ನಟಿ :-
ಪ್ರಥಮ : ರಂಗನಟಿ ಡಾ. ಮಾಧವಿ ಎಸ್. ಭಂಡಾರಿ ಪ್ರಾಯೋಜಿತ ನಗದು ಬಹುಮಾನ ರೂ. 3,000 ಮತ್ತು ದಿ| ಶ್ರೀನಿವಾಸ ಎಸ್. ಶೆಟ್ಟಿಗಾರ್ ಸ್ಮಾರಕ ಸ್ಮರಣಿಕೆ -
"ಮಂದಾರ (ರಿ.) ಬೈಕಾಡಿ, ಉಡುಪಿ "ತಂಡದ "ಕೊಳ್ಳಿ " ನಾಟಕದ "ದ್ರೌಪದಿ " ಪಾತ್ರಧಾರಿಣಿ "ಪ್ರಿಯಾ ಬ್ರಹ್ಮಾವರ ".
ದ್ವಿತೀಯ (ಇಬ್ಬರಿಗೆ ಲಭಿಸಿದೆ): ರಂಗನಟಿ ಡಾ. ಮಾಧವಿ ಎಸ್. ಭಂಡಾರಿ ಪ್ರಾಯೋಜಿತ ನಗದು ಬಹುಮಾನ ರೂ. 2,000 ಮತ್ತು ದಿ|ಶ್ರೀನಿವಾಸ ಎಸ್. ಶೆಟ್ಟಿಗಾರ್ ಸ್ಮಾರಕ ಸ್ಮರಣಿಕೆ -
"ಸುಮನಸಾ ಕೊಡವೂರು - ಉಡುಪಿ (ರಿ.)" ತಂಡದ "ಅರುಂಧತಿ ಆಲಾಪ " ನಾಟಕದ “ಆರುಂದತಿ " ಪಾತ್ರಧಾರಿಣಿ "ಪ್ರಜ್ಞಾಶ್ರೀ ".
ಹಾಗೂ
"ಭೂಮಿಕಾ (ರಿ.) ಹಾರಾಡಿ, ಉಡುಪಿ ತಂಡದ "ಸೂರ್ಯಾಸ್ತದಿಂದ ಸೂರ್ಯೋದಮದವರೆಗೆ" ನಾಟಕದ "ಶೀಲವತಿ" ಪಾತ್ರದಾರಿಣಿ " ರಂಜಿತಾ ಶೇಟ್"
ತೃತೀಯ : ಅಭಿನೇತ್ರಿ ಶ್ರೀಮತಿ ವಿನಯಾ ಪ್ರಸಾದ್ ಪ್ರಾಯೋಜಿತ ನಗದು ಬಹುಮಾನ ರೂ. 1,000 ಮತ್ತು ದಿ| ಯು. ದುಗ್ಗಪ್ಪ ಸ್ಮಾರಕ ಸ್ಮರಣಿಕೆ -
"ಮಂದಾರ (ರಿ.) ಬೈಕಾಡಿ, ಉಡುಪಿ " ತಂಡದ "ಕೊಳ್ಳಿ " ನಾಟಕದ "ಉಜ್ಜಿ" ಪಾತ್ರಧಾರಿಣಿ "ಶ್ವೇತಾ ಮಣಿಪಾಲ".
ಶ್ರೇಷ್ಠ ಸಂಗೀತ :-
ಪ್ರಥಮ : ರಂಗನಟ ಎನ್.ರಾಜಗೋಪಾಲ ಬಲ್ಲಾಳ್ ಪ್ರಾಯೋಜಿತ ನಗದು ಬಹುಮಾನ ರೂ.3,000 ಮತ್ತು ದಿ| ಉಡುಪಿ ದಾಸ ಭಟ್ ಸ್ಮಾರಕ ಸ್ಮರಣಿಕೆ -
ಪ್ರಥಮ :ಶ್ರೀ ಅನುಷ್ ಶೆಟ್ಟಿ - ಮುನ್ನ - ಗಣೇಶ್
ನಾಟಕ - "ವಾಲಿವಧೆ " ತಂಡ - "ಶ್ರೀ ಗಜಾನನ ಯುವಕ ಮಂಡಲ (ರಿ.) ಶೇಷಗಿರಿ, ಹಾವೇರಿ "
ದ್ವಿತೀಯ : ರಂಗನಟ ಎನ್.ರಾಜಗೋಪಾಲ ಬಲ್ಲಾಳ್ ಪ್ರಾಯೋಜಿತ ನಗದು ಬಹುಮಾನ ರೂ.2,000 ಮತ್ತು ದಿ| ಉಡುಪಿ ದಾಸ ಭಟ್ ಸ್ಮಾರಕ ಸ್ಮರಣಿಕೆ :
ಶ್ರೀ ಶ್ರೀಪಾದ್ ತೀರ್ಥಹಳ್ಳಿ - ನಾಟಕ - "ತುರುಬ ಕಟ್ಟುವ ಹದನ " ತಂಡ - " ನಟ ಮಿತ್ರರು (ರಿ.) ತೀರ್ಥಹಳ್ಳಿ"
ತೃತೀಯ :ರಂಗನಟ ಎನ್.ರಾಜಗೋಪಾಲ ಬಲ್ಲಾಳ್ ಪ್ರಾಯೋಜಿತ ನಗದು ಬಹುಮಾನ ರೂ.1,000 ಮತ್ತು ಹೋಟೆಲ್ ಡಯನಾ ಪ್ರಾಯೋಜಿತ ಸ್ಮರಣಿಕೆ :
ಶ್ರೀ ಲೋಹಿತ್ ಕೊಮೆ - ನಾಟಕ - " ಕೊಳ್ಳಿ"
ತಂಡ - "ಮಂದಾರ (ರಿ.) ಬೈಕಾಡಿ, ಉಡುಪಿ "
ಶ್ರೇಷ್ಠ ರಂಗಸಜ್ಜಿಕೆ ಮತ್ತು ರಂಗಪರಿಕರ :-
ಪ್ರಥಮ : ದಿ| ರವೀಂದ್ರ ಬಿ.ಕೋಟ್ಯಾನ್ ಸ್ಮರಣಾರ್ಥ ನಗದು ಬಹುಮಾನ ರೂ. 3,000 ಮತ್ತು ಡಾ| ಟಿ.ಎಂ.ಎ. ಪೈ ಪ್ರತಿಷ್ಠಾನ ಪ್ರಾಯೋಜಿತ ಸ್ಮರಣಿಕೆ -
ನಾಟಕ - " ತುರುಬ ಕಟ್ಟುವ ಹದನ"
ತಂಡ - "ನಟ ಮಿತ್ರರು (ರಿ.) ತೀರ್ಥಹಳ್ಳಿ "
ದ್ವಿತೀಯ : ದಿ|ರವೀಂದ್ರ ಬಿ.ಕೋಟ್ಯಾನ್ ಸ್ಮರಣಾರ್ಥ ನಗದು ಬಹುಮಾನ ರೂ. 2,000 ಮತ್ತು ಹೋಟೆಲ್ ತಾಂಬೂಲಮ್ ಪ್ರಾಯೋಜಿತ ಸ್ಮರಣಿಕೆ -
ನಾಟಕ - "ವಾಲಿವಧೆ"
ತಂಡ - "ಶ್ರೀ ಗಜಾನನ ಯುವಕ ಮಂಡಲ (ರಿ.) ಶೇಷಗಿರಿ, ಹಾವೇರಿ"
ತೃತೀಯ : ದಿ|ರವೀಂದ್ರ ಬಿ.ಕೋಟ್ಯಾನ್ ಸ್ಮರಣಾರ್ಥ ನಗದು ಬಹುಮಾನ ರೂ. 1,000 ಮತ್ತು ಹೋಟೆಲ್ ಡಯನಾ ಪ್ರಾಯೋಜಿತ ಸ್ಮರಣಿಕೆ -
ನಾಟಕ - "ಸೂರ್ಯಾಸ್ತದಿಂದ ಸೂರ್ಯೋದಮದವರೆಗೆ "
ತಂಡ - " ಭೂಮಿಕಾ (ರಿ.) ಹಾರಾಡಿ "
ಶ್ರೇಷ್ಠ ಪ್ರಸಾಧನ :-
ಪ್ರಥಮ :ದಿ। ಉಷಾ ಶಾಂತಾರಾಮ್, ದಿ। ಎಸ್ ಎಲ್ ನಾರಾಯಣ ಭಟ್ ಮತ್ತು ದಿ। ಟಿ. ಉಪೇಂದ್ರ ಪೈ ಸ್ಮಾರಕ ನಗದು ಬಹುಮಾನ ರೂ.3,000 ಮತ್ತು ಡಾ| ಟಿ.ಎಂ.ಎ. ಪೈ ಪ್ರತಿಷ್ಠಾನ ಪ್ರಾಯೋಜಿತ ಸ್ಮರಣಿಕೆ -
ಶ್ರೀ ನಿರಂಜನ್ ಪವರ್
ನಾಟಕ - "ತುರುಬ ಕಟ್ಟುವ ಹದನ"
ತಂಡ - "ನಟ ಮಿತ್ರರು (ರಿ.) ತೀರ್ಥಹಳ್ಳಿ"
ದ್ವಿತೀಯ : ರಂಗನಟ ಯು.ಎಂ.ಅಸ್ಲಾಂ ಪ್ರಾಯೋಜಿತ ನಗದು ಬಹುಮಾನ ರೂ. 2,000 ಮತ್ತು ದಿ| ವಿ. ಪ್ರಭಾಕರ ಹೆಗ್ಡೆ ಸ್ಮಾರಕ ಸ್ಮರಣಿಕೆ -.
ಶ್ರೀ ಪೃಥ್ವಿನ್ ಕೆ. ವಾಸು
ನಾಟಕ - " ವಾಲಿವಧೆ"
ತಂಡ - "ಶ್ರೀ ಗಜಾನನ ಯುವಕ ಮಂಡಲ (ರಿ.) ಶೇಷಗಿರಿ, ಹಾವೇರಿ"
ತೃತೀಯ : ಸದಾನಂದ ಸುವರ್ಣ, ಮುಂಬಾಯಿ ಪ್ರಾಯೋಜಿತ ನಗದು ಬಹುಮಾನ ರೂ.1,000 ಮತ್ತು ದಿ| ಮಲ್ಪೆ ಮಧ್ವರಾಜ್ ಸ್ಮಾರಕ ಸ್ಮರಣಿಕೆ -.
ಶ್ರೀ ರಮೇಶ್ ಕಪಿಲೇಶ್ವರ
ನಾಟಕ - "ಕೊಳ್ಳಿ"*
ತಂಡ - "ಮಂದಾರ (ರಿ.) ಬೈಕಾಡಿ, ಉಡುಪಿ"
ಶ್ರೇಷ್ಠ ರಂಗ ಬೆಳಕು :
ಪ್ರಥಮ: ಶ್ರೀಮತಿ ಬೀಬಿ ಜಾನ್ - ಖಲಂದರ್ ಸಾಬ್, ಅರಸೀಕೆರೆ ಸ್ಮಾರಕ ನಗದು ಬಹುಮಾನ ರೂ.3,000 ಮತ್ತು ಅಂಬಲಪಾಡಿ ಜನಾರ್ದನ ಮತ್ತು ಮಹಾಕಾಳಿ ದೇವಸ್ಥಾನ ಪ್ರಾಯೋಜಿತ ಸ್ಮರಣಿಕೆ -
ಶ್ರೀ ರಾಜು ಮಣಿಪಾಲ
ನಾಟಕ - "ಕೊಳ್ಳಿ "
ತಂಡ - " ಮಂದಾರ (ರಿ.) ಬೈಕಾಡಿ, ಉಡುಪಿ"
ದ್ವಿತೀಯ :
ಶ್ರೀಮತಿ ಬೀಬಿ ಜಾನ್ - ಖಲಂದರ್ ಸಾಬ್, ಅರಸೀಕೆರೆ ಸ್ಮಾರಕ ನಗದು ಬಹುಮಾನ ರೂ.2,000 ಮತ್ತು ಡಾ. ಬಿ.ಬಿ. ಶೆಟ್ಟಿ ಸ್ಮಾರಕ ಸ್ಮರಣಿಕೆ -
ಶ್ರೀ ಪೃಥ್ವಿನ್ ಕೆ. ವಾಸು
ನಾಟಕ - "ವಾಲಿವಧೆ"
ತಂಡ -"ಶ್ರೀ ಗಜಾನನ ಯುವಕ ಮಂಡಲ (ರಿ.) ಶೇಷಗಿರಿ, ಹಾವೇರಿ "
ತೃತೀಯ :
ಶ್ರೀಮತಿ ಬೀಬಿ ಜಾನ್ - ಖಲಂದರ್ ಸಾಬ್, ಅರಸೀಕೆರೆ ಸ್ಮಾರಕ ನಗದು ಬಹುಮಾನ ರೂ.1,000 ಮತ್ತು ಹೋಟೆಲ್ ತಾಂಬೂಲಮ್ ಪ್ರಾಯೋಜಿತ ಸ್ಮರಣಿಕೆ -
ಶ್ರೀ ಚಂದನ್ ಶಿವಮೊಗ್ಗ*
ನಾಟಕ - “ತುರುಬ ಕಟ್ಟುವ ಹದನ "
ತಂಡ - " ನಟ ಮಿತ್ರರು (ರಿ.) ತೀರ್ಥಹಳ್ಳಿ"
ಶ್ರೇಷ್ಠ ಹಾಸ್ಯ ನಟನೆ :-
ಶ್ರೀ ಮಂಡ್ಯ ರಮೇಶ್ ಪ್ರಾಯೋಜಿತ ನಗದು ಬಹುಮಾನ ರೂ.2,000 ಮತ್ತು ಯು.ಪಿ. ಶೆಣೈ ಪ್ರಾಯೋಜಿತ ಸ್ಮರಣಿಕೆ -
" ನಟ ಮಿತ್ರರು (ರಿ.) ತೀರ್ಥಹಳ್ಳಿ " ತಂಡದ " ತುರುಬ ಕಟ್ಟುವ ಹದನ " ನಾಟಕದ "ಉತ್ತರ ಕುಮಾರ " ಪಾತ್ರಧಾರಿ "ಶ್ರೀ ನಂದನ್ ಎಂ. ಎಸ್ "
ಶ್ರೇಷ್ಠ ಬಾಲ ನಟನೆ :-
ದಿ| ಮಂಜುಳಾ ಸತ್ಯನಾರಾಯಣ ಹೆಗಡೆ ಸ್ಮಾರಕ ಅವರ ಮಗ ಶ್ರೀಪಾದ ಹೆಗಡೆ ಅವರ ಕೊಡುಗೆ
ನಗದು ಬಹುಮಾನ ರೂ.1,000 ಮತ್ತು ಹೋಟೆಲ್ ಡಯನಾ ಪ್ರಾಯೋಜಿತ ಸ್ಮರಣಿಕೆ
"ಶ್ರೀ ಗಜಾನನ ಯುವಕ ಮಂಡಲ (ರಿ.) ಶೇಷಗಿರಿ, ಹಾವೇರಿ " ತಂಡದ "ವಾಲಿವಧೆ " ನಾಟಕದ "ಬಾಲ ಸುಗ್ರೀವ " ಪಾತ್ರಧಾರಿ " ಉದಯ್ ಬಿ."
"ಮೆಚ್ಚುಗೆ ಬಹುಮಾನಗಳು ಹಾಗೂ ದಿ| ವಿ. ಪ್ರಭಾಕರ ಹೆಗ್ಡೆ , ದಿ ಯು. ಉಪೇಂದ್ರ ಸ್ಮಾರಕ ಸ್ಮರಣಿಕೆ :-
"ಬಿಂಕ ಬಿನ್ನಾಣರು ರಂಗತಂಡ, ಬೆಂಗಳೂರು" ತಂಡದ "ಸುಯೋಧನ " ನಾಟಕದ " ಸುಯೋಧನ" ಪಾತ್ರಧಾರಿ "ಶಿವು ಹೊನ್ನಿಗನ ಹಳ್ಳಿ"
"ಸಂಚಯ ಟ್ರಸ್ಟ್, ಬೆಂಗಳೂರು " ತಂಡದ "ತದ್ರೂಪಿ " ನಾಟಕದ "ತದ್ರೂಪಿ" ಪಾತ್ರಧಾರಿ "ಕೃಷ್ಣ ಹೆಬ್ಬಾರ್ "
ಭೂಮಿಕಾ (ರಿ.) ಹಾರಾಡಿ, ಉಡುಪಿ ತಂಡದ " ಸೂರ್ಯಾಸ್ತದಿಂದ ಸೂರ್ಯೋದಯದವರೆಗೆ" ನಾಟಕದ " ಓಕ್ಕಾಕ" ಪಾತ್ರಧಾರಿ "ಶ್ರೀ ಸುನಿಲ್ ಪಾಂಡೇಶ್ವರ"
"ನಟ ಮಿತ್ರರು (ರಿ.) ತೀರ್ಥಹಳ್ಳಿ " ತಂಡದ "ತುರುಬ ಕಟ್ಟುವ ಹದನ " ನಾಟಕದ " ದುರ್ಯೋಧನ" ಪಾತ್ರಧಾರಿ "ಶ್ರೀ ಶರತ್ ಕುಮಾರ್ ಇ. ಜಿ "
"ರಂಗಪಯಣ ತಂಡ, ಬೆಂಗಳೂರು" ತಂಡದ "ಪೂಲನ್ ದೇವಿ" ನಾಟಕದ "ಪೂಲನ್ ದೇವಿ" ಪಾತ್ರಧಾರಿಣಿ "ಶ್ರೀಮತಿ ನಯನಾ ಜೆ. ಸೂಡ"
ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜುಕೇಶನ್, ಪಿ.ವಿ.ಎಸ್. ಗ್ರೂಪ್ಸ್ ಮಂಗಳೂರು, ಎಂ.ಜಿ.ಎಂ ಕಾಲೇಜು, ಉಡುಪಿ ಹಾಗೂ ಹಲವಾರು ಸಂಸ್ಥೆಗಳ, ಕಲಾ ಪೋಷಕರ ಸಹಕಾರದೊಂದಿಗೆ ಅತ್ಯಂತ ಯಶಸ್ವಿಯಾಗಿ ನವೆಂಬರ್ 23 ರಿಂದ ಡಿಸೆಂಬರ್ 04 ರವರೆಗೆ 12 ದಿನಗಳ ಕಾಲ ಈ ರಾಜ್ಯ ಮಟ್ಟದ ನಾಟಕ ಸ್ಪರ್ಧೆಯು ನಡೆಯಿತು. ಈ ಬಾರಿಯ ಸ್ಪರ್ಧೆಯ ತೀರ್ಪುಗಾರರಾಗಿ ಉಡುಪಿಯ ಶ್ರೀ ಕೆ.ಲಕ್ಷ್ಮೀನಾರಾಯಣ ಭಟ್, ಶ್ರೀ ಪ್ರಭಾಕರ್ ಜಿ. ಪಿ. ತುಮುರಿ, ಶ್ರೀಮತಿ ಛಾಯಾ ಭಾರ್ಗವಿ, ಬೆಂಗಳೂರು, ಶ್ರೀ ಸಿದ್ದರಾಜು ಎಸ್.ಎಸ್, ದಾವಣಗೆರೆ, ಶ್ರೀ ರಿಯಾಜ್ ಸಿಹಿಮೊಗೆ, ಹೊಸಪೇಟೆ ಇವರುಗಳು ಸಹಕರಿಸಿದ್ದರು. ನಾಟಕ ಸ್ಪರ್ಧೆಯ ಯಶಸ್ವಿಗೆ ಸಹಕರಿಸಿದ ಎಲ್ಲರಿಗೂ "ರಂಗಭೂಮಿ (ರಿ.) ಉಡುಪಿ" ಸಂಸ್ಥೆಯ ಹೃತ್ಪೂರ್ವಕ ಕೃತಜ್ಞತೆಗಳು.
"ರಂಗಭೂಮಿ ಪ್ರಶಸ್ತಿ ಪ್ರಧಾನ ಸಮಾರಂಭ "ವು 2023ರ ಜನವರಿ 3ನೇ ವಾರದಲ್ಲಿ 43ನೇ ರಾಜ್ಯ ಮಟ್ಟದ ಕನ್ನಡ ನಾಟಕ ಸ್ಪರ್ಧೆಯ ಬಹುಮಾನ ವಿತರಣಾ ಕಾರ್ಯಕ್ರಮ" ವು ಉಡುಪಿ ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ನಡೆಯಲಿದೆ. ಅಂದು ಪ್ರಥಮ ಪ್ರಶಸ್ತಿ ಪುರಸ್ಕೃತ " ಶ್ರೀ ಗಜಾನನ ಯುವಕ ಮಂಡಲ (ರಿ.) ಶೇಷಗಿರಿ, ಹಾವೇರಿ " ತಂಡದ "ವಾಲಿವಧೆ" ನಾಟಕದ ಮರು ಪ್ರದರ್ಶನ ಇರುವುದು* ಎಂದು "ರಂಗಭೂಮಿ" ಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಕಾಮೆಂಟ್ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ