Slider

ಜಾಹೀರಾತಿಗಾಗಿ ಸಂಪರ್ಕಿಸಿ

ಫೋನ್: 86605 39735

ಕುಂದಾಪುರ: ಹೃದಯಾಘಾತದಿಂದ ಲಾರಿ ಚಾಲಕ ಮೃತ್ಯು

Udupinews

 






ಕುಂದಾಪುರ: ಹೃದಯಾಘಾತದಿಂದ ಲಾರಿ ಚಾಲಕ ಮೃತ್ಯು


ಕುಂದಾಪುರ: ಅಂಪಾರು ಗ್ರಾಮದ ನೆಲ್ಲಿಕಟ್ಟೆ ಬಳಿ ಲಾರಿ ಚಾಲನೆ ವೇಳೆ ಚಾಲಕನಿಗೆ ಹೃದಯಘಾತವಾಗಿ ಮೃತಪಟ್ಟ ಘಟನೆ ನ.13ರ ಮಧ್ಯರಾತ್ರಿಯಂದು ನಡೆದಿದೆ.

ಮೃತಪಟ್ಟ ಲಾರಿ ಚಾಲಕ ವಿಶಾಂತ್‌(29). ಲಾರಿಯು ಮಂಗಳೂರಿನ ಇರ್ಪಾನ್‌ ಎಂಬುವವರ ಮಾಲಿಕತ್ವದ ಟ್ರಾನ್ಸ್‌ಪೋರ್ಟ್‌ ಆಗಿದೆ. ಮಂಗಳೂರಿನಿಂದ ಕಲ್ಲಿದ್ದಲು ತುಂಬಿಸಿಕೊಂಡು, ಬಳ್ಳಾರಿಗೆ ಹೋಗುತ್ತಿದ್ದ ಲಾರಿಯನ್ನು ವಿಶಾಂತ್‌ ಅವರು ಚಲಾಯಿಸುತ್ತಿದ್ದು, ಅಂಪಾರು ಗ್ರಾಮದ ನೆಲ್ಲಿಕಟ್ಟೆ ಬಳಿ ಎದೆ ನೋವು ಕಾಣಿಸಿಕೊಂಡಿತ್ತು. ಕೂಡಲೆ 108 ವಾಹನದ ಮೂಲಕ ಕುಂದಾಪುರ ತಾಲೂಕು ಸರಕಾರಿ ಆಸ್ಪತ್ರೆಗೆ ಕರೆಕೊಂಡು ಹೋಗಿದ್ದು, ಪರೀಕ್ಷಿಸಿದ ವೈದ್ಯರು ಮೃತಪಟ್ಟಿದ್ದಾರೆ ಎಂದು ತಿಳಿಸಿದರು.

ಸಹೋದರ ನವಿನ್‌ ಅವರು ಪೊಲೀಸರಿಗೆ ದೂರು ನೀಡಿದರು. ಶಂಕರನಾರಾಯಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.









0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo