ಉಡುಪಿ ಜಿಲ್ಲೆಯಲ್ಲಿ ನಿಸ್ವಾರ್ಥ ಸೇವೆ ನೀಡುತ್ತಿರುವ ದಾದಿಯರ (ನರ್ಸಸ್) ಹೆಮ್ಮೆಯ ಸೇವೆಯನ್ನು ಗುರುತಿಸಿ, ಅವರ ಪ್ರಯತ್ನಗಳಿಗೆ ಗೌರವ ಸಲ್ಲಿಸುವ ದೃಷ್ಟಿಯಿಂದ ಗಿರಿಜಾ ಸರ್ಜಿಕಲ್ಸ್ ಹಾಗೂ ಸೀನಿಯರ್ ಜೆಸಿಐ, ಟೆಂಪಲ್ ಸಿಟಿ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ಅಂತರರಾಷ್ಟ್ರೀಯ ದಾದಿಯರ ದಿನಾಚರಣೆ ನಡೆಸಲಾಯಿತು.
ಕಾರ್ಯಕ್ರಮವು ಉಡುಪಿಯ ಜಿಲ್ಲಾ ಸರಕಾರಿ ಆಸ್ಪತ್ರೆಯ ಸಭಾಂಗಣದಲ್ಲಿ ಜರುಗಿದ್ದು, ನರ್ಸಿಂಗ್ ವೃತ್ತಿಯ ಮಹತ್ವ, ದಾದಿಯರ ತ್ಯಾಗಮಯ ಜೀವನ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಅವರ ಪಾತ್ರವನ್ನು ವಿಶೇಷವಾಗಿ ಪ್ರತಿಪಾದಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ಸರ್ಜನ್ ಡಾ. ಅಶೋಕ್, ಆಸ್ಪತ್ರೆಯ RMO ಡಾ. ವಾಸುದೇವ, ಸೀನಿಯರ್ ಜೆಸಿಐ ಅಧ್ಯಕ್ಷ ಶ್ರೀ ಶಿವಾನಂದ ಶೆಟ್ಟಿಗಾರ್, ಹಾಗೂ ಗಿರಿಜಾ ಗ್ರೂಪ್ ಆಫ್ ಕನ್ಸರ್ನ್ಸ್ನ ಮ್ಯಾನೇಜಿಂಗ್ ಡೈರೆಕ್ಟರ್ ರವೀಂದ್ರ ಶೆಟ್ಟಿ ಕಡೆಕಾರ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ದಾದಿಯರಿಗೆ ಪ್ರಾಮುಖ್ಯತೆ ನೀಡುವ ಬಗ್ಗೆ ಮಾತನಾಡಿದರು.
ಹಿರಿಯ ಐದು ಮಂದಿ ದಾದಿಯರನ್ನು ವಿಶೇಷವಾಗಿ ಸನ್ಮಾನಿಸಲಾಗಿದ್ದು, ಉಳಿದ ಎಲ್ಲಾ ನರ್ಸಿಂಗ್ ಸಿಬ್ಬಂದಿಯ ಸೇವೆಗೂ ಗೌರವಪೂರ್ವಕ ಕೃತಜ್ಞತೆ ಸಲ್ಲಿಸಲಾಯಿತು. ಆಸ್ಪತ್ರೆಯ ನರ್ಸಿಂಗ್ ಸುಪರಿಂಟೆಂಡೆಂಟ್ ರತ್ನವತಿ ಅವರು ಕಾರ್ಯಕ್ರಮದ ಯಶಸ್ಸಿಗೆ ಸಹಕಾರ ನೀಡಿದರು.
ಇದೇ ಸಂದರ್ಭದಲ್ಲಿ ಸೀನಿಯರ್ ಜೆಸಿಐ ಸದಸ್ಯರು, ಗಿರಿಜಾ ಸರ್ಜಿಕಲ್ಸ್ ನ ಸಿಬ್ಬಂದಿ ವರ್ಗ, ಹಾಗೂ ಹಲವಾರು ಆರೋಗ್ಯ ಸೇವಾ ತಜ್ಞರು ಹಾಜರಿದ್ದರು.
ಗಿರಿಜಾ ಸರ್ಜಿಕಲ್ಸ್ ಸಂಸ್ಥೆಯು ಉಡುಪಿಯ ಹೊರತಾಗಿಯೂ ಕುಂದಾಪುರ ಮತ್ತು ಮಂಗಳೂರಿನ ವಿವಿಧ ಆಸ್ಪತ್ರೆಗಳಲ್ಲಿ ಕೂಡ ನರ್ಸಸ್ ಡೇ ಕಾರ್ಯಕ್ರಮಗಳನ್ನು ಆಯೋಜಿಸಿ, ಸ್ಥಳೀಯ ದಾದಿಯರ ಸೇವೆಗೆ ಗೌರವ ಸಲ್ಲಿಸಿದೆ.
ಈ ಪ್ರಯತ್ನವು ಆರೋಗ್ಯ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ದಾದಿಯರಲ್ಲಿ ಹೊಸ ಉತ್ಸಾಹವನ್ನು ತುಂಬಿದ್ದು, ನರ್ಸಿಂಗ್ ವೃತ್ತಿಗೆ ಹೆಚ್ಚಿನ ಮಾನ್ಯತೆ ನೀಡುವತ್ತ ಗಮನ ಸೆಳೆಯುತ್ತಿದೆ.
ಕಾಮೆಂಟ್ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ