Slider

ಜಾಹೀರಾತಿಗಾಗಿ ಸಂಪರ್ಕಿಸಿ

ಫೋನ್: 86605 39735

ಬ್ರಹ್ಮಾವರ:-ಪಿಕಪ್ ವಾಹನ ಢಿಕ್ಕಿ ಬೈಕ್ ಸವಾರ ಮೃತ್ಯು

 


ಬ್ರಹ್ಮಾವರ: ಪಿಕಪ್ ವಾಹನವೊಂದು ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮೃತಪಟ್ಟು, ಆತನ ಮಗ ಗಾಯಗಳೊಂದಿಗೆ ಪಾರಾದ ಘಟನೆ ಪಟಪಾಡಿ- ನೀಲಾವರ ರಸ್ತೆಯಲ್ಲಿ ಬುಧವಾರ ಸಂಜೆ ನಡೆದಿದೆ.

ಮೃತರನ್ನು ಬೈಕ್ ಸವಾರ ಅಚ್ಯುತ್ ಆಚಾರ್ಯ (60) ಎಂದು ಗುರುತಿಸ ಲಾಗಿದೆ. ಬೈಕ್‌ನಲ್ಲಿದ್ದ ಅವರ ಮಗ ಅರವಿಂದ ಗಾಯಗಳೊಂದಿಗೆ ಪಾರಾಗಿದ್ದಾರೆ. ಸಂಜೆ 5 ಗಂಟೆ ಸುಮಾರಿಗೆ ಅಚ್ಯುತ್ ಆಚಾರ್ಯ ಅವರು ಮಗನನ್ನು ಕುಳ್ಳಿರಿಸಿಕೊಂಡು ನೀಲಾವರದಿಂದ ಮಟಪಾಡಿಯತ್ತ ಸಾಗುತಿದ್ದಾಗ ನೀಲಾವರ ಗ್ರಾಮದ ನೀಲಾವರ ವಿಶ್ವಂಭರ ಗೇರುಬೀಜದ ಕಾರ್ಖಾನೆ ಎದುರು ಅತೀ ವೇಗದಿಂದ ಧಾವಿಸಿ ಬಂದ ಪಿಕಪ್ ವಾಹನ ಬೈಕ್‌ಗೆ ಡಿಕ್ಕಿ ಹೊಡೆದಿತ್ತು.

ಇದರಿಂದ ಬೈಕ್ ಸಮೇತ ಅಚ್ಯುತ್ ಆಚಾರ್ಯ ಹಾಗೂ ಅರವಿಂದ ರಸ್ತೆಗೆ ಬಿದ್ದಿದ್ದು, ಅಚ್ಯುತ್ ಆಚಾರ್ಯರ ತಲೆಗೆ ತೀವ್ರತರದ ಗಾಯಗಳಾಗಿದ್ದು, ಅರವಿಂದ ಅವರ ಎರಡು ಕಾಲುಗಳಿಗೆ ರಕ್ತಗಾಯವಾಗಿತ್ತು. ತಕ್ಷಣ ಅವರನ್ನು ಬ್ರಹ್ಮಾವರ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದರೂ, ಅದಾಗಲೇ ಅವರು ಮೃತಪಟ್ಟಿರುವು ದಾಗಿ ವೈದ್ಯರು ಘೋಷಿಸಿದರು.

 ಈ ಬಗ್ಗೆ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo