ನೆಲ್ಯಾಡಿ : ಇಲ್ಲಿನ ದೋಂತಿಲ ಸಮೀಪದ ತೋಟ ಎಂಬಲ್ಲಿ ಅಂಚೆ ಇಲಾಖೆಯಲ್ಲಿ ಉದ್ಯೋಗಿಯಾಗಿದ್ದ ಪದ್ಮಯ್ಯ ಗೌಡ ಎಂಬವರ ಪತ್ನಿ ಸೇಸಮ್ಮ (ಜಾನಕಿ) (60) ಹೃದಯಾಘಾತದಿಂದ ಆಗಷ್ಟ 5 ರಂದು ನಿಧನರಾದರು. ಪತಿ ಪದ್ಮಯ ಗೌಡರಿಗೆ ಆಗಷ್ಟ 5 ರಂದು ಬೆಳಗ್ಗೆ ತೋಟದಲ್ಲಿ ವಿಷದ ಹಾವೊಂದು ಕಚ್ಚಿದ ಪರಿಣಾಮ ಅವರನ್ನು ಮಂಗಳೂರಿನ ಕೊಂಡೊಯ್ಯ ಲಾಗಿದ್ದು. ಈ ವಿಷಯವನ್ನು ತಿಳಿದ ಪತ್ನಿ ಸೇಸಮ್ಮ ಅವರು ಆಘಾತಗೊಂಡು ಹೃದಯಾಘಾತದಿಂದ ನಿಧನ ಹೊಂದಿದರು ಎಂದು ತಿಳಿದು ಬಂದಿದೆ.
ಪ್ರಸ್ತುತ ಪದ್ಮಯ ಗೌಡ ಅವರು ಆಸ್ಪತ್ರೆಯಲ್ಲಿ ಚೇತರಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಮೃತರು ಪತಿ ಹಾಗೂ ಇಬ್ಬರು ಗಂಡು, ಒಂದು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.
ಕಾಮೆಂಟ್ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ